Thank you message


Saturday, 7 October 2017

ಸಂತಸದ ಅವನತಿಗೆ ನಮ್ಮ ಅತಿ ಆಸೆಯೆ ಕಾರಣ...

ಸಂತಸದ ಅವನತಿಗೆ ನಮ್ಮ ಅತಿ ಆಸೆಯೆ ಕಾರಣ 
ಮಾನವನ ಆಸೆಗಳಿಗೆ ಪಂಚ ಇಂದ್ರಿಯಗಳೆ ಪ್ರೇರಣ 

ಎಲ್ಲಕ್ಕಿಂತ ಕ್ರೂರವಾದುದು ನಮ್ಮ ಬಯಕೆಗಳ ಧಾಹ 
ಮಣ್ಣಲ್ಲಿ ಮಣ್ಣಾಗುವ ನಶ್ವರ ಇ ನಮ್ಮ ದೇಹ 
ಆದರೂ ಎಂದೂ ಬಿಡದು ಎಲ್ಲವನು ಪಡೆಯುವ ಮೋಹ 

ಜೀವನದ ಹಾದಿಯಲಿ ನಾವಿಡುವ ಪ್ರತಿ ಹೆಜ್ಜೆಗಳು ನಮ್ಮದು 
ಒಂದು ಹೆಜ್ಜೆಗೆ ಹೂವು ಇನ್ನೊಂದಕ್ಕೆ ಮುಳ್ಳು ಎಂಬ ನಿರ್ಣಯ ಯಾರದು 
ಹೂವೆ ಆಗಲಿ ಮುಳ್ಳೇ ಆಗಲಿ ಕೊನೆಯ ನಿರ್ಧಾರ ಅವನದು

                                               ಶಿವಪ್ರಸಾದ ಮಿಣಜಿಗಿ