Thank you message


Saturday, 10 June 2017

ಪ್ರಕೃತಿ...

ನನ್ನ ಮೌನವು ಮಾತನಾಡಿದೆ ಇಂದು ನಿನ್ನ ಕಂಡು
ಮನವಿಂದು ತಣಿದಿದೆ ತಂಪಾದ ಗಾಳಿಯ ಸಿಹಿಯ ಉಂಡು

ಪರ್ವತಗಳ ತಪ್ಪಲಿನಲಿ ಮಾನ್ಸೂನ ಮಳೆಯ ವೇಗದ ಏರಿಕೆ
ಮುಸ್ಸಂಜೆ ಯಾಗುತಿರಲು ಸೂರ್ಯನ ಮುಖದ ಕಳೆಯಲಿ ಇಳಿಕೆ
ಪ್ರಕೃತಿಯ ಸಾಮ್ರಾಜ್ಯದಲಿ ಪಂಚಭೂತಗಳದೆ ಆಳ್ವಿಕೆ

ಮಿತವಾಗಿ ಮಾಡಬೇಕು ನಾವು ನಿನ್ನಯ ಬಳಕೆ
ಇಲ್ಲವಾದರೆ ನಾ ಕಾಣೆನು ನಾಳೆಯ ಪೀಳಿಗೆಯ ಉಳಿಕೆ
ಹೀಗೆ ಬಿಟ್ಟರೆ ಭೂಮಿಯಲ್ಲೇ ನಾವು ಕಾಣಬಹುದು ಚಂದ್ರನ ಮೇಲಿನ ಕುಳಿಕೆ

                                                                     ಶಿವಪ್ರಸಾದ ಮಿಣಜಿಗಿ