Thank you message


Saturday, 11 March 2017

ಮನುಜನಿಗಲ್ಲದೆ ಮರಗಳಿಗೆ ಬರುಹುದೆ ಕಷ್ಟವು...

ಮನುಜನಿಗಲ್ಲದೆ ಮರಗಳಿಗೆ ಬರುಹುದೆ ಕಷ್ಟವು 
ನರನಿಗಲ್ಲದೆ ಹರನಿಗಿರುವುದೆ ಬಾಳಿನ ನಷ್ಟವು 

ಎಲ್ಲಾ ಕಷ್ಟದ ಕ್ಷಣಗಳನು ತಾಳ್ಮೆ ಇಂದ ನೀ ನೋಡು 
ಒಳ್ಳೆಯ ಕ್ಷಣಗಳನು ಹರಸುತ ದೇವರನು ನೀ ಬೇಡು 
ಕತ್ತಲು ಸರಿದು ಹಾಡಲೇಬೇಕು ಬೆಳಕಿನ ಶುಭ ಸಂದೇಶದ ಹಾಡು 

ಕಷ್ಟದ ಜೀವನವು ದುಃಖದ ಮರಗಳಿಂದ ಕೂಡಿದ ಕಾಡು 
ಆಶಾವಾದದಿಂದ ನೀ ನೋಡು ಶುಭ ಘಳಿಗೆ ಹುಟ್ಟುವ ಸೂರ್ಯೋದಯದ ನಾಡು 
ಓ ದೇವರೇ ಸಂತಸದ ಕ್ಷಣಗಳನು ನೀ ಹೊತ್ತು ನಮ್ಮ ಬಾಳಲಿ ಮೂಡು 

                                                             ಶಿವಪ್ರಸಾದ ಮಿಣಜಿಗಿ